ಶಬರಿಮಲೆಯು ಭಾರತದ ಅತ್ಯಂತ ಪವಿತ್ರ ತೀರ್ಥಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಶಬರಿಮಲೆ ದೇವಾಲಯವು ಒಂದು ಪವಿತ್ರ ಧಾಮವಾಗಿದೆ. ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರನ್ನೂ ಶಬರಿಮಲೆಗೆ ಸ್ವಾಗತಿಸಲಾಗುತ್ತದೆ.
ಶಬರಿಮಲೆಯಲ್ಲಿ ಪ್ರಮುಖ ತೀರ್ಥಯಾತ್ರಾ ಕಾಲವು 41 ದಿನಗಳ ಮಂಡಲ ಕಾಲವಾಗಿದ್ದು, ಇದು ಮಲಯಾಳಂ ತಿಂಗಳ ವೃಶ್ಚಿಕಂನ (ನವೆಂಬರ್-ಡಿಸೆಂಬರ್) ಮೊದಲ ದಿನದಂದು ಪ್ರಾರಂಭವಾಗುತ್ತದೆ. ಇದು ಭಕ್ತಿಯ ಪಠಣಗಳು ಮತ್ತು ವಿಧಿವಿಧಾನಗಳಿಂದ ಗುರುತಿಸಲ್ಪಟ್ಟ ಅವಧಿಯಾಗಿದ್ದು, ಅದು ಪ್ರಪಂಚದಾದ್ಯಂತ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.
ಶಬರಿಮಲೆಗೆ ನಿಮ್ಮನ್ನು ಕರೆದೊಯ್ಯುವ ಮೂರು ಸುಂದರವಾದ ಮಾರ್ಗಗಳಿವೆ. ಒಂದು ಎರುಮೇಲಿ ಮೂಲಕ, ಇನ್ನೊಂದು ಚಾಲಕ್ಕಯಂ ಮೂಲಕ ಮತ್ತು ಮೂರನೆಯದು ವಂಡಿಪೆರಿಯಾರ್ ಮೂಲಕ.
ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ದೇಗುಲಕ್ಕೆ ಯಾತ್ರೆ ಕೈಗೊಳ್ಳಬೇಕೆನ್ನುವುದು ಪ್ರತಿಯೊಬ್ಬ ಅಯ್ಯಪ್ಪ ಭಕ್ತರ ಕನಸಾಗಿದೆ....
ಇದು ಸಾಂಪ್ರದಾಯಿಕ ಮಾರ್ಗವಲ್ಲ. ಆದರೆ, ಇದು ನಿಮ್ಮ ಸನ್ನಿಧಾನದ ಪ್ರವಾಸದಲ್ಲಿ ಅತ್ಯಾಕರ್ಷಕ ಮಾರ್ಗವಾಗಿದೆ....
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವು ಸ್ವಾಮಿ (ಭಗವಾನ್) ಅಯ್ಯಪ್ಪನಿಗೆ ಸಮರ್ಪಿತವಾಗಿದೆ. ಶಬರಿಮಲೆಯ ಗುಡ್ಡದಲ್ಲಿರುವ ಶ್ರೀ ಧರ್ಮ ಶಾಸ್ತ ದೇವಸ್ಥಾನವು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ಪರ್ವತಗಳು ಮತ್ತು ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ.
ಶಬರಿಮಲೆಯಲ್ಲಿ ನೋಡಲು, ತಿಳಿದುಕೊಳ್ಳಲು ಮತ್ತು ಅನುಭವಿಸಲು ಬಹಳಷ್ಟು ಸಂಗತಿಗಳಿವೆ. ನೀವೇ ಒಮ್ಮೆ ಗಮನಿಸಿ
ನೀವು ತಿರುವಾಂಕೂರು (ತಿರುವಿತಾಂಕೂರ್) ದೇವಸ್ವಂ ಬೋರ್ಡ್ ಕಛೇರಿಯ ಸಹಾಯವನ್ನು ಪಡೆಯಬಹುದು.
ಕಾರ್ಯನಿರ್ವಾಹಕ ಅಧಿಕಾರಿ +91 473 520 2028
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ +91 473 520 2400
ಆಡಳಿತಾಧಿಕಾರಿ +91 473 520 2038
ಮಾಹಿತಿ ಕಚೇರಿ +91 473 520 2048